Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮತ್ತಿಕೆರೆಯಲ್ಲಿ `ಟೀನೇಜ್` ಸಾಂಗ್
Posted date: 28 Wed, Mar 2012 ? 08:49:11 AM

ಸಾಲ್ಟ್ ಎಂಡ್ ಪೆಪರ್ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಟೀನೇಜ್ ಚಿತ್ರಕ್ಕಾಗಿ ಶ್ರೀಕಾಂತ್ ಹಾಗೂ ರಘು ನಿಡುವಳ್ಳಿ ಅವರು ಬರೆದಿರುವ ‘ಏನಿದು ಮನಸಲಿ ಒಂಥರಾ ಕಚಗುಳಿ ಎಂಬ ಹಾಡಿನ ಚಿತ್ರೀಕರಣ ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಲ್ಲಿ ನಡೆದಿದೆ. ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ ಈ ಗೀತೆಗೆ ಕಿಶನ್ ಹಾಗೂ ಪ್ರಿಯಾ ಹೆಜ್ಜೆ ಹಾಕಿದ್ದಾರೆ.
      ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಕಿಶನ್ ಅಭಿನಯಿಸುತ್ತಿದ್ದಾರೆ. ಕಿಶನ್, ಅಪೂರ್ವ, ತನ್ವಿ, ಪ್ರಿಯಾ, ಜಯಶ್ರೀ, ಮಿತ್ರ, ವಿ.ಮನೋಹರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಹೇಶ್ ಛಾಯಾಗ್ರಹಣವಿರುವ ‘ಟೀನೇಜ್‘ಗೆ ಸಿದ್ದಾರ್ಥ್ ಸಂಗೀತ ನೀಡಿದ್ದಾರೆ. ನಾಯಕರಾಗಿ ಅಭಿನಯಿಸುತ್ತಿರುವ ಕಿಶನ್ ಚಿತ್ರದ ಸಂಕಲಕಾರರಾಗೂ ಕಾರ್ಯ ನಿರ್ವಹಿಸಿದ್ದಾರೆ. ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮತ್ತಿಕೆರೆಯಲ್ಲಿ `ಟೀನೇಜ್` ಸಾಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.