ಸಾಲ್ಟ್ ಎಂಡ್ ಪೆಪರ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಟೀನೇಜ್ ಚಿತ್ರಕ್ಕಾಗಿ ಶ್ರೀಕಾಂತ್ ಹಾಗೂ ರಘು ನಿಡುವಳ್ಳಿ ಅವರು ಬರೆದಿರುವ ‘ಏನಿದು ಮನಸಲಿ ಒಂಥರಾ ಕಚಗುಳಿ ಎಂಬ ಹಾಡಿನ ಚಿತ್ರೀಕರಣ ಮತ್ತಿಕೆರೆಯ ಜೆ.ಪಿ.ಪಾರ್ಕ್ನಲ್ಲಿ ನಡೆದಿದೆ. ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ ಈ ಗೀತೆಗೆ ಕಿಶನ್ ಹಾಗೂ ಪ್ರಿಯಾ ಹೆಜ್ಜೆ ಹಾಕಿದ್ದಾರೆ.
ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಕಿಶನ್ ಅಭಿನಯಿಸುತ್ತಿದ್ದಾರೆ. ಕಿಶನ್, ಅಪೂರ್ವ, ತನ್ವಿ, ಪ್ರಿಯಾ, ಜಯಶ್ರೀ, ಮಿತ್ರ, ವಿ.ಮನೋಹರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಹೇಶ್ ಛಾಯಾಗ್ರಹಣವಿರುವ ‘ಟೀನೇಜ್‘ಗೆ ಸಿದ್ದಾರ್ಥ್ ಸಂಗೀತ ನೀಡಿದ್ದಾರೆ. ನಾಯಕರಾಗಿ ಅಭಿನಯಿಸುತ್ತಿರುವ ಕಿಶನ್ ಚಿತ್ರದ ಸಂಕಲಕಾರರಾಗೂ ಕಾರ್ಯ ನಿರ್ವಹಿಸಿದ್ದಾರೆ. ಮಾಸ್ಮಾದ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.